ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಇತ್ತೀಚೆಗೆ ಅನೇಕ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಒಂದು ವೇಳೆ ನಿಮಗಿನ್ನೂ ಈ ಹಣ ಬಂದಿಲ್ಲದಿದ್ದರೆ ಅಥವಾ ಸ್ಟೇಟಸ್ ಹೇಗಿದೆ ಎಂದು ತಿಳಿಯಬೇಕಿದ್ದರೆ, ಈ ಕೆಳಗಿನ ಸುಲಭ ಹಂತಗಳನ್ನು ಅನುಸರಿಸಿ ನೀವು ಮೊಬೈಲ್ನಲ್ಲೇ ಚೆಕ್ ಮಾಡಬಹುದು.
ಹಣ ಜಮೆಯಾಗಿದೆಯೇ ಎಂದು ಚೆಕ್ ಮಾಡುವುದು ಹೇಗೆ?
ನೀವು ಎರಡು ಮುಖ್ಯ ವಿಧಾನಗಳ ಮೂಲಕ ಹಣದ ಸ್ಥಿತಿಯನ್ನು (Status) ತಿಳಿದುಕೊಳ್ಳಬಹುದು:
1. ಡಿಬಿಟಿ ಕರ್ನಾಟಕ ಆ್ಯಪ್ (DBT Karnataka App) ಮೂಲಕ
- ಪ್ಲೇಸ್ಟೋರ್ನಿಂದ ‘DBT Karnataka’ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ.
- ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ಹಾಗೂ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ಮೂಲಕ ಲಾಗಿನ್ ಆಗಿ.
- ನಂತರ 4 ಅಂಕಿಗಳ mPIN ಸೆಟ್ ಮಾಡಿಕೊಳ್ಳಿ.
ಆ್ಯಪ್ನಲ್ಲಿ ‘Payment Status’ ಮೇಲೆ ಕ್ಲಿಕ್ ಮಾಡಿ. ಅಲ್ಲಿ ‘ಗೃಹಲಕ್ಷ್ಮಿ’ ಯೋಜನೆಯ ಅಡಿಯಲ್ಲಿ ಎಷ್ಟು ಕಂತುಗಳು ಜಮೆಯಾಗಿವೆ ಎಂಬ ವಿವರ ಕಾಣಿಸುತ್ತದೆ.
2. ಆಹಾರ ಇಲಾಖೆಯ ವೆಬ್ಸೈಟ್ ಮೂಲಕ
- ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಅಲ್ಲಿ ‘ಇ-ಸೇವೆಗಳು’ (e-Services) ಟ್ಯಾಬ್ ಕ್ಲಿಕ್ ಮಾಡಿ, ‘ಸ್ಥಿತಿ’ (Status) ವಿಭಾಗದಲ್ಲಿ ‘ಡಿಬಿಟಿ ಸ್ಥಿತಿ’ (DBT Status) ಆಯ್ಕೆಮಾಡಿ.
- ನಿಮ್ಮ ಜಿಲ್ಲೆಯನ್ನು ಆರಿಸಿ, ಪಡಿತರ ಚೀಟಿ (RC Number) ಸಂಖ್ಯೆ ನಮೂದಿಸಿ ಸರ್ಚ್ ಮಾಡಿದರೆ ಹಣದ ವಿವರ ತಿಳಿಯುತ್ತದೆ.
ಹಣ ಬರದಿದ್ದರೆ ಈ ಕೆಳಗಿನವುಗಳನ್ನು ಗಮನಿಸಿ
- ನಿಮ್ಮ ಖಾತೆಗೆ ಹಣ ಬರದೇ ಇರಲು ಕೆಲವು ಸಾಮಾನ್ಯ ಕಾರಣಗಳಿರಬಹುದು
- KYC ಸಮಸ್ಯೆ: ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು NPCI (Mapping) ಕಡ್ಡಾಯವಾಗಿ ಆಗಿರಬೇಕು.
- ಪಡಿತರ ಚೀಟಿ ತಿದ್ದುಪಡಿ: ರೇಷನ್ ಕಾರ್ಡ್ನಲ್ಲಿ ಯಜಮಾನಿ ಎಂದು ಗುರುತಿಸಿಕೊಂಡಿರುವವರ ಮಾಹಿತಿ ಆಧಾರ್ ಕಾರ್ಡ್ಗೆ ಹೊಂದಾಣಿಕೆಯಾಗದಿದ್ದರೆ ತೊಂದರೆಯಾಗಬಹುದು.
- ಬ್ಯಾಂಕ್ ಖಾತೆ ಸಕ್ರಿಯವಾಗಿಲ್ಲದಿರುವುದು: ದೀರ್ಘಕಾಲದಿಂದ ವ್ಯವಹಾರ ನಡೆಸದಿದ್ದರೆ ಖಾತೆ ‘In-active’ ಆಗಿರಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ
ನೀವು ನೇರವಾಗಿ ಸರ್ಕಾರದ ಸಹಾಯವಾಣಿ ಸಂಖ್ಯೆ 1902 ಕ್ಕೆ ಕರೆ ಮಾಡಿ ನಿಮ್ಮ ಅರ್ಜಿಯ ಸ್ಥಿತಿಯನ್ನು ವಿಚಾರಿಸಬಹುದು.
ಗಮನಿಸಿ: ಹಣ ಜಮೆಯಾಗುವ ಪ್ರಕ್ರಿಯೆಯು ಹಂತ-ಹಂತವಾಗಿ ನಡೆಯುವುದರಿಂದ, ನಿಮ್ಮ ಎಲ್ಲ ದಾಖಲೆಗಳು ಸರಿಯಾಗಿದ್ದರೆ ಶೀಘ್ರದಲ್ಲೇ ನಿಮ್ಮ ಖಾತೆಗೆ ಹಣ ಬರಲಿದೆ.